ರಾಷ್ಟ್ರಶಕ್ತಿ ಅಂದರೆ…
ಬಹಳ ದಿನಗಳಾದವು. ಈ ನಡುವೆ ಜಾಗೋ ಭಾರತ್ ನೂರನೆ ಕಾರ್ಯಕ್ರಮದ ಮೇಲೆ ಹನ್ನೆರಡು ಕಾರ್ಯಕ್ರಮಗಳು ನಡೆದವು. ಚಕ್ರವರ್ತಿಯವರು ಕೃಷ್ಣದೇವರಾಯ ಹಾಗೂ ವಿಜಯನಗರ ಸಾಮ್ರಾಜ್ಯದ ಬಗ್ಗೆ ಹಾಗೂ ಇಸ್ಲಾಮ್ ಮೂಲಭೂತವಾದದ ಮೂಲ ಸೆಲೆಯ ಬಗ್ಗೆ ಅಧ್ಯಯನ ನಡೆಸುತ್ತಿದ್ದು ಪುಸ್ತಕ ಬರೆಯಲಿದ್ದಾರೆ. ಇತಿಹಾಸ ಹೀಗೂ ಇದೆ ಅನ್ನುವುದು ತಿಳಿಯಬೇಕಾದರೆ ಈ ಕೃತಿಗಳ ಅಗತ್ಯವಿದೆ. ಅವು ಆದಷ್ಟು ಬೇಗ ಬರಲಿ ಎಂಬುದು ರಾಷ್ಟ್ರ ಶಕ್ತಿ ಕೇಂದ್ರದ ಅಪೇಕ್ಷೆ.
ಜೊತೆಗೆ ಮತ್ತಷ್ಟು ಸಮಾಜಮುಖಿ ಯೋಜನೆಗಳಿವೆ. ಈ ವರ್ಷದಲ್ಲಿ ಕಾರ್ಯಗತಗೊಳ್ಳಬೇಕಾದ ಪಟ್ಟಿ ಸಿದ್ಧವಿದೆ. ಕಾಲಕ್ರಮದಲ್ಲಿ ಎಲ್ಲವೂ ಸಾಧ್ಯವಾಗಬಹುದು.
ಖುಷಿಯ ವಿಷಯವೆಂದರೆ, ಜಾಗೋ ಭಾರತ್ ಆಶಯಗಳಿಗೆ ಯುವಕರ ಸ್ಪಂದನೆ. ಅದು ಉನ್ಮತ್ತ ಆರಾಧನೆಯಲ್ಲ. ಅಲ್ಲಿ ತೂಗಿ ನೋಡುವ ವೈಚಾರಿಕತೆಯಿದೆ. ಹಾಗಿಲ್ಲದೆ ಜಾತಿ-ಪಂಥ-ಭಾಷೆ ಭೇದವಿಲ್ಲದೆ ಜನರು ಜಾಗೋಭಾರತ್ ಗೆ ಒಲಿಯುತ್ತಿರಲಿಲ್ಲ. ಗೆಳೆಯರೊಬ್ಬರು ಕೇಳಿದ್ದರು, ‘ನೀವು ಜಾಗೋ ಭಾರತ್ ಮಾಡ್ತೀರಿ, ಜಾಗೋ ಮುಸ್ಲಿಮ್, ಜಾಗೋ ದಲಿತ್ ಎಲ್ಲ ಯಾಕೆ ಮಾಡಲ್ಲ’ ಅಂತ! ನಾನು ಹೇಳಿದೆ, ‘ನಮ್ಮ ಭಾರತದಲ್ಲಿ ದಲಿತರೂ ಇದ್ದಾರೆ, ಮುಸ್ಲಿಮರೂ ಇದ್ದಾರೆ. ನಾವು ಸೌಹಾರ್ದದ ಹೆಸರಲ್ಲಿ ನಡುವಿನ ಅಂತರವನ್ನು ಎತ್ತೆತ್ತಿ ತೋರಿಸುತ್ತ ಖಾಯಂ ಬಿರುಕಿಗೆ ಆಸ್ಪದ ಕೊಡುವಂಥವರಲ್ಲ’ ಎಂದು. ಸರಿಯಾಗಿದೆ ಅಲ್ಲವೆ?
ಜಾಗೋ ಭಾರತ್ ಆಶಯವೂ ಇದೇ. ಎಲ್ಲರೂ ಒಂದಾಗಿ ಮುನ್ನಡೆದಾಗ ಮಾತ್ರ ಭಾರತ ಮುನ್ನಡೆಯುತ್ತದೆ. ರಾಷ್ಟ್ರಶಕ್ತಿ ಅಂದರೆ ಈ ಸೀಮೆಯೊಳಗಿನ ಪ್ರತಿಯೊಬ್ಬನ ಶಕ್ತಿ. ಅದನ್ನು ಹಿಡಿದಿಡುವ ಕೇಂದ್ರ ದೇಶಪ್ರೇಮ.
ನಮ್ಮೊಂದಿಗಿರಿ.
ಇರುತ್ತೀರಲ್ಲ?
ಪ್ರೀತಿಯಿಂದ,
ರಾ.ಶ.ಕೇಂದ್ರ ಬಳಗ
ಪ್ರೀತಿಯಿಂದ,ರಾ.ಶ.ಕೇಂದ್ರ ಬಳಗ
ಏಪ್ರಿಲ್ ತಿಂಗಳ ಕಾರ್ಯಕ್ರಮಗಳು
ಚಕ್ರವರ್ತಿ ಸೂಲಿಬೆಲೆ ಅವರ ಏಪ್ರಿಲ್ ತಿಂಗಳ ಕಾರ್ಯಕ್ರಮಗಳು:
ಏಪ್ರಿಲ್ ೨ – ಜಾಗೋ ಭಾರತ್- ಕೋಟ
ಏಪ್ರಿಲ್ ೭ – ಜಾಗೋ ಭಾರತ್- ಮಲ್ಪೆ
ಏಪ್ರಿಲ್ ೧೦ – ಜಾಗೋ ಭಾರತ್- ಕಾರ್ಕಳ
ಏಪ್ರಿಲ್ ೧೧ – ವಚನ ಗಂಗಾ- ಬೆಂಗಳೂರು- ಗೋಖಲೆ ಇನ್ಸ್ಟಿಟ್ಯೂಟ್- ಸಂಜೆ ೫ರಿಂದ
ಏಪ್ರಿಲ್ ೧೮ – ಜಾಗೋ ಭಾರತ್- ನೆತ್ತರಕೆರೆ
ಏಪ್ರಿಲ್ ತಿಂಗಳ ಕಾರ್ಯಕ್ರಮಗಳು
ಚಕ್ರವರ್ತಿ ಸೂಲಿಬೆಲೆ ಅವರ ಏಪ್ರಿಲ್ ತಿಂಗಳ ಕಾರ್ಯಕ್ರಮಗಳು:
ಏಪ್ರಿಲ್ ೨ – ಜಾಗೋ ಭಾರತ್- ಕೋಟಏಪ್ರಿಲ್ ೭ – ಜಾಗೋ ಭಾರತ್- ಮಲ್ಪೆಏಪ್ರಿಲ್ ೧೦ – ಜಾಗೋ ಭಾರತ್- ಕಾರ್ಕಳಏಪ್ರಿಲ್ ೧೧ – ವಚನ ಗಂಗಾ- ಬೆಂಗಳೂರುಏಪ್ರಿಲ್ ೧೮ – ಜಾಗೋ ಭಾರತ್- ನೆತ್ತರಕೆರೆ
leave a comment